ಗುರುವಾರ, ಮೇ 19, 2011

ಆದಿತ್ಯ ದರ್ಶನಂ

ಮುಗಿಲ ಗೋಪುರಗಳೆಡೆಯೊಳ್ ಥಳಥಳಿಸಿ ಮಿನುಗಿಸಿ ಅಗ್ನಿಜ್ವಾಲೆ
ಅದೆನಿತೆನಿತು ರೂಪಂಗಳೊoದಿಹೆ ಆವ ಉದರದೊಳು ಹುಟ್ಟಿ?
ಕ್ಷಣದೊಳ್ ಮುತ್ತಿಟ್ಟು ಹೊರಗಟ್ಟಿ ಧಗಧಗಿಪೆ ಹೇ ಜಗಜ್ಯೋತಿ
ಮುದ್ದಿಸಲಾಗಮಿಸಲೆನ್ನ ನೇತ್ರಗೊಂಬೆಯ ದಿಟ್ಟಿ !
ತುಸು ಸರಿದು ಮರೆಯಾಗಿ ಸರಿದೋಡಲು ಮುಗಿಲ ಸಾಲುಗಳ್
ರಸರೌದ್ರಗೆಂಡನಾದೊಡಮೇನ್
ದೆಸೆದೆಸೆಗಳ್ಗತ್ತಲೆಯನೆತ್ತಿ ನವಬೆಳಕ ಬೀರದಿರ್ದೊಡೆ ?
ಇಹುದೆನಗೆ ನಂಬುಗೆಯು ಆರೆಂಬುದು ನೀ-
ಭಾವಲೋಕದ ಭಾವಾಗ್ನಿಯೇ
ಬಾರೆನ್ನ ಮನದಿ ನೆಲೆಸು!

1 ಕಾಮೆಂಟ್‌: