ಗಂಡ ಪೊಲೀಸ್ ಹೆಂಡ್ತಿ ಲಾಯರ್
ಸಿಕ್ಕಾಪಟ್ಟೆ ಫೈಟು
ಬೀದ್ ಬೀದೀಲಿ ಕಲ್ ತೂರಾಟ
ಮನೇಲ್ ಬೆಲ್ಟು ಸೌಟು
ಖಾಕಿ ಪ್ಯಾಂಟು ಒಗೆಯೋಳಲ್ಲ
ಕೋಣೆ ತುಂಬ ನಾತ
ಕರಿಕೋಟು ಪೇದೆ ಕಣ್ಗೆ
ಭಯಂಕರ ಭೂತ
ನಾಲ್ಗೇಗ್ ನರ್ಕ ತೋರ್ಸೋ ಚಟ್ನಿ
ತೂತೇ ಇಲ್ದ ದೋಸೆ
ವಡವೆ ಸೀರೆ ಅಂಗ್ಡಿಗ್ ರಜಾ
ಮಲ್ಗೆ ಹೂವ ಕನಸೇ
ಒಂದೇ ಬೆಡ್ ರೂಂ ಎರಡೆರಡ್ ಲೋಕ
ಸೆಂಟ್ರಲ್ ಪಾಪಿ ಕೂಸು
ಬಗ್ ನೋಡೋರ್ಗೆ ಕಾಣೋದಲ್ಲಿ
ಇಂಡ್ಯಾ ಪಾಕ್ ಮ್ಯಾಪು
ಸೋಮವಾರ, ಮಾರ್ಚ್ 12, 2012
ಕರಿಬಸವಯ್ಯ ಕಣ್ಮರೆ
ಕೆ.ಬಿ.ಎಂದೇ ಪರಿಚಿತರಾಗಿದ್ದ ಪ್ರತಿಭಾವಂತ ನಟ ಕರಿಬಸವಯ್ಯ ಇಂದು ನಮ್ಮೊಂದಿಗಿಲ್ಲ.ಹಾಗಂತ ಅವರು ಜೀವ ತುಂಬಿದ ಪಾತ್ರಗಳಿಗಾಗಲಿ,ಅವರು ಮೂಡಿಸಿದ ದಾಖಲಾರ್ಹ ಹೆಜ್ಜೆಗಳಿಗಾಗಲಿ ಯಾವತ್ತೂ ಕೊನೆಯೆಂಬುದಿಲ್ಲ.ನಾಟಕವಿರಲಿ,ಧಾರಾವಾಹಿಯಿರಲಿ,ಸಿನಿಮಾ ಇರಲಿ ಅಥವಾ ಹರಿಕಥೆ-ಹಾಸ್ಯ ಕಾರ್ಯಕ್ರಮಗಳಿರಲಿ,ಅಲ್ಲಿ ಕರಿಬಸವಯ್ಯ ತಮ್ಮದೇ ವಿನೂತನ ಶೈಲಿಯ ಪ್ರತಿಭಾ ಪ್ರದರ್ಶನದಿಂದ ಕಲಾ ರಸಿಕರ ಮನಸುಗಳಲ್ಲಿ ನವಿರು ಭಾವನೆಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದರು.
ನೆಲಮಂಗಲ ಸಮೀಪದ ಕೊಡಿಗೆಹಳ್ಳಿಯಿಂದ ಕನಸುಗಳ ಬುತ್ತಿಯನ್ನು ಹೆಗಲಿಗೇರಿಸಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ತಿರುಗುತ್ತಿದ್ದ ಕರಿಬಸವಯ್ಯನವರಿಗೆ ಮೊದಲು ಕೈ ಹಿಡಿದಿದ್ದು ರಂಗಭೂಮಿ.ಮೊದಲೆಲ್ಲ ಚಿಕ್ಕ ಚಿಕ್ಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಇವರು ಆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ಮೂಲಕ ಹಿರಿಯ ರಂಗತಜ್ಞರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಕ್ರಮೇಣ ಪ್ರಮುಖ ಪಾತ್ರಗಳು ಇವರನ್ನು ಹುಡುಕಿಕೊಂಡು ಬರತೊಡಗಿದವು.೧೯೮೯ ರಲ್ಲಿ 'ರೂಪಾಂತರ'ಕ್ಕೆ ಸೇರಿದ ನಂತರವಂತೂ ಕರಿಬಸವಯ್ಯನವರ ಇಮೇಜೇ ಬದಲಾಗತೊಡಗಿತು.
ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.'ತಲೆದಂಡ' ನಾಟಕದ ಬಸವಣ್ಣನ ಪಾತ್ರವಿರಬಹುದು,'ಮುಸ್ಸಂಜೆಯ ಕಥಾ ಪ್ರಸಂಗ'ದ ಬಸ್ಯನ ಪಾತ್ರವಿರಬಹುದು,'ಕರ್ವಾಲೋ'ದ ಬಿರಿಯಾನಿ ಕರಿಯನ ಪಾತ್ರವಿರಬಹುದು,ಗಾಂಧೀ ಜಯಂತಿ,ಗುಣಮುಖ,ಬಡೇ ಸಾಬ್ ಪುರಾಣ,ಮಳೆ ಬೀಜ ಸೇರಿದಂತೆ ಅನೇಕ ನಾಟಕಗಳಲ್ಲಿ ಅವರು ನಿರ್ವಹಿಸಿದ ವಿಭಿನ್ನ ಪಾತ್ರಗಳಿರಬಹುದು-ಯಾವುದೇ ಪಾತ್ರವಿದ್ದರೂ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ಅಪೂರ್ವ,ಅನನ್ಯ ಕಲಾವಿದ ಕರಿಬಸವಯ್ಯನವರು.
ಯಾವಾಗ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರೋ ಸಿನಿಮಾ ಮಂದಿಯ ಕಣ್ಣು ಕೆ.ಬಿ.ಯವರ ಕಡೆ ಹರಿಯಿತು.ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಮ್ಮ ನಿರ್ದೇಶನದ 'ಉಂಡು ಹೋದ ಕೊಂದು ಹೋದ'ಚಿತ್ರದಲ್ಲಿ ಅವಕಾಶ ನೀಡಿದರು.ಆ ಚಿತ್ರ ಯಾವಾಗ ಭರ್ಜರಿ ಯಶಸ್ಸು ಸಾಧಿಸಿತೋ ಕರಿಬಸವಯ್ಯನವರಿಗೆ ಅನೇಕ ಅತ್ಯುತ್ತಮ ಅವಕಾಶಗಳು ಬರತೊಡಗಿದವು.ಕೊಟ್ರೇಶಿ ಕನಸು,ಜನುಮದ ಜೋಡಿ,ಮುಂಗಾರಿನ ಮಿಂಚು,ಯಾರಿಗೆ ಸಾಲತ್ತೆ ಸಂಬಳ-ಚಿತ್ರಗಳನ್ನೊಳಗೊಂಡಂತೆ ಹತ್ತು ಹಲವು ಬಗೆಯ ಪಾತ್ರಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಹೆಜ್ಜೆ ಗುರುತು ಮೂಡಿಸುವಲ್ಲಿ ಯಶಸ್ವಿಯಾಗತೊಡಗಿದರು.
ಕರಿಬಸವಯ್ಯನವರು ಸ್ವಭಾವತಃ ತುಂಬ ಚುರುಕಿನ ಮನುಷ್ಯರಾಗಿದ್ದರು.ದಿನದ ಇಪ್ಪತ್ನಾಲ್ಕು ಗಂಟೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿ ಸದಾ ಲವಲವಿಕೆಯಿಂದಿರುತ್ತಿದ್ದರು. ಕೆ.ಬಿ.ಯವರ ಮತ್ತೊಂದು ಇಷ್ಟವಾಗುವ ಅಂಶವೆಂದರೆ ಎಂಥವರೊಂದಿಗೂ ಒಗ್ಗಿಬಿಡುವ,ಇಷ್ಟವಾಗಿಬಿಡುವ ವ್ಯಕ್ತಿತ್ವ.ತಾವೊಬ್ಬ ಪ್ರಸಿದ್ಧ ನಟನೆಂಬ ಕಿಂಚಿತ್ತು ಅಹಂಕಾರವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ತಮ್ಮ ಕಾಯಕದಲ್ಲಿ ಸದಾ ದೇವರನ್ನು ಕಾಣಲೆತ್ನಿಸುತ್ತಿದ್ದರು.ಅವರ ಸರಳತೆ ಹಾಗು ಸಹೃದಯತೆಗೆ ಹಲವಾರು ಉದಾಹರಣೆ ಕೊಡಬಹುದು:ಹರಿಕಥೆ ನಡೆಸಿಕೊಡಬೇಕೆಂದು ಎಲ್ಲಿಂದ ಕರೆ ಬಂದರೂ ತಕ್ಷಣ ಹೊರಟುಬಿಡುತ್ತಿದ್ದರು,ಹಾಸ್ಯ ಕಾರ್ಯಕ್ರಮಗಲಿದ್ದರೂ ಅಷ್ಟೇ,ಬಿಡುವು ಸಿಕ್ಕಾಗೆಲ್ಲ ಉತ್ಸಾಹದಿಂದ ಭಾಗವಹಿಸಿ ನೆರೆದವರೆದುರು ತಮ್ಮ ಸ್ಫುಟವಾದ ಮಾತುಗಳ ಮೂಲಕ ನಗೆಯ ಹೊಳೆಯನ್ನೇ ಹರಿಸಿ ಬಿಡುತ್ತಿದ್ದರು.
ಸಿನಿಮಾ,ಕಿರುತೆರೆಗಳಲ್ಲಿ ತಾವೆಷ್ಟೇ ಬಿಜಿಯಾಗಿದ್ದರೂ ರಂಗಭೂಮಿಯ ಮೇಲೆ ಮಾತೃಸಂಬಂಧ ಹೊಂದಿದ್ದರೆಂಬುದಕ್ಕೆ ಸಾಕ್ಷಿ ಅವರು 'ರೂಪಾಂತರ'ದ ಜೊತೆ ಇಟ್ಟುಕೊಂಡಿದ್ದ ಭಾವನಾತ್ಮಕ ಸಂಬಂಧ.'ರೂಪಾಂತರ'ದ ಅಧ್ಯಕ್ಷರಾಗಿದ್ದ ಕರಿಬಸವಯ್ಯನವರು ಸಂಸ್ಥೆಯ ಏಳ್ಗೆಗಾಗಿ ಅವಿರತ ದುಡಿಯುತ್ತಿದ್ದರು.ಅನೇಕ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು.ಅವುಗಳಲ್ಲಿ ಮುಖ್ಯವಾಗಿ,'ರೂಪಾಂತರ'ದ ಕಲಾವಿದ,ತಂತ್ರಜ್ಞರಿಗೆ ಕೇಂದ್ರ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಆರ್ಥಿಕ ಸಹಾಯ ದೊರಕಿಸಿ ಕೊಡುವುದು,ಗ್ರಾಮೀಣ ಪ್ರದೇಶಗಳಲ್ಲಿ ಯಥೆಚ್ಚ್ಹವಾದ ರಂಗ ಚಟುವಟಿಕೆಗಳನ್ನ ಹಮ್ಮಿಕೊಂಡು ಯುವಕ-ಯುವತಿಯರಲ್ಲಿ ರಂಗಾಸಕ್ತಿ ಮೂಡಿಸುವುದು,ಹೊಸದಾಗಿ,ವಿಭಿನ್ನವಾಗಿ ಯೋಚಿಸುವ ಹೊಸತಲೆಮಾರಿನ ಯುವ ನಾಟಕಕಾರರಿಂದ ಹೊಸ ಬಗೆಯ ನಾಟಕಗಳನ್ನು ಬರೆಸಿ ರಂಗಕ್ಕೆ ತರುವುದು,ಹಾಗೆಯೇ ಹಿರುಯ ನಾಟಕಕಾರರ ನಾಟಕಗಳಲ್ಲಿನ ದಾರ್ಶನಿಕತೆ,ಜೀವನ ಪ್ರೀತಿ,ವ್ವೈಚಾರಿಕತೆ,ಮಾನವೀಯ ಸಂಬಂಧಗಳ ಕುರಿತು ಅರಿವು ಮೂಡಿಸುವುದು, ಸಮಾಜಮುಖಿಯಾಗಿರುವ ಕಥೆಗಳನ್ನು ಆರಿಸಿಕೊಂಡು ರಂಗರೂಪ ನೀಡುವುದು,ಹಾಗೂ ಕಳೆದ ದಶಕಗಳಲ್ಲಿ 'ರೂಪಾಂತರ' ಸಂಸ್ಥೆ ನಡೆದು ಬಂದ ದಾರಿಯನ್ನೂ,ಏರಿದ ಎತ್ತರವನ್ನೂ ಒಂದು ಕಡೆ ದಾಕ್ಯುಮೆಂಟಾಗಿಸುವುದು ಹಾಗು ನಂತರದ ತಲೆಮಾರಿನ ರಂಗಭೂಮಿಗೆ ಹೊಸ ದಿಕ್ಕು,ಹೊಸ ಚೇತನ ಒದಗಿಸಬೇಕೆಂದು ಕನಸು ಕಂಡಿದ್ದರು.
'ರೂಪಾಂತರ' ಸಂಸ್ಥೆಗೂ ಅಷ್ಟೇ,ಕೆ.ಬಿ.ಯವರೆಂದರೆ ಇನ್ನಿಲ್ಲದ ಪ್ರೀತಿ.ಮೂರು ವರ್ಷಗಳ ಹಿಂದೆಯಷ್ಟೇ ಕರಿಬಸವಯ್ಯನವರ ಜನ್ಮದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಕತ್ತಲಲ್ಲು ಯಶಸ್ಸಿನ ತ್ರಿಶೂಲ ಹಿಡಿದ ಕಥೆ' -ಎಂಬ ಹೆಸರಿನ ಅಭಿನಂದನಾ ಗ್ರಂಥ ಹೊರತರಲಾಯಿತು.ಕೆ.ಎಸ್.ಡಿ.ಎಲ್.ಚಂದ್ರು ಹಾಗು ನರೇಂದ್ರ ಬಾಬು ಈ ಕೃತಿಯ ಸಂಪಾದಕರು.ವಿಪರ್ಯಾಸವೆಂದರೆ ಅದೇ ರವೀಂದ್ರ ಕಲಾಕ್ಷೇತ್ರ ಆವರಣದ 'ಸಂಸ'ಬಯಲು ರಂಗಮಂದಿರದಲ್ಲೇ ಕೆ.ಬಿ.ಯವರಿಗೆ ಅಂತಿಮ ನಮನ ಸಲ್ಲಿಸಬೇಕಾದ ದುಃಖದ ಸ್ಥಿತಿ ಎದುರಾಯಿತು.
ಕನಕದಾಸರ 'ರಾಮಧಾನ್ಯ' ನಾಟಕ 'ರೂಪಾಂತರ'ದ ವತಿಯಿಂದ ಇಪ್ಪತ್ತ ನಾಲ್ಕು ಪ್ರದರ್ಶನ ಕಂಡಿತ್ತು.ಇಪ್ಪತ್ತೈದನೇ ಅದ್ಧೂರಿ ಪ್ರದಶನಕ್ಕಾಗಿ ಕರಿಬಸವಯ್ಯನವರು ತಂಡದೊಂದಿಗೆ ಸಮಾಲೋಚನೆ ನಡೆಸಿ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದರು.ಅಷ್ಟರಲ್ಲಿ ಅವರನ್ನು ಕಳೆದುಕೊಂಡಿದ್ದೇವೆ.ಇವರ ಮುಂದಾಳತ್ವದಲ್ಲಿ ಸಜ್ಜುಗೊಂಡಿದ್ದ ಇಟಗಿ ಈರಣ್ಣನವರ 'ಯಹೂದಿ ಹುಡುಗಿ' ನಾಟಕ ಕಳೆದ ವಾರವಷ್ಟೇ ಮುಂಬಯಿಯಲ್ಲಿ ನಡೆದ 'ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆ'ಯಲ್ಲಿ ಮೊದಲನೇ ಬಹುಮಾನ ಪಡೆದಿತ್ತಲ್ಲದೆ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.ಆ ಸುದ್ಧಿ ಕೇಳಿ ಕರಿಬಸವಯ್ಯ ಸಂತಸ ವ್ಯಕ್ತ ಪಡಿಸಿದ್ದರು.ಅದು ಹೆಚ್ಚು ಕಾಲ ಉಳಿಯಲಿಲ್ಲ.
ಇನ್ನು ಪ್ರಶಸ್ತಿಗಳ ವಿಷಯಕ್ಕೆ ಬಂದರೆ,ಕೆ.ಬಿ.ಯವರಿಗೆ 'ಕೊಟ್ರೇಶಿ ಕನಸು'ಚಿತ್ರದ ಅದ್ಭುತ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.ಆದರೂ ಇವರ ಪ್ರತಿಭೆಗೆ ಸಿಗಬೇಕಾದ ಗೌರವ,ಸ್ಥಾನಮಾನ ಸಿಗಲಿಲ್ಲವೆಂದೇ ಹೇಳಬಹುದು.ಕಳೆದ ಸಾಲಿನ 'ರಾಜ್ಯೋತ್ಸವ ಪ್ರಶಸ್ತಿ'ಗಾಗಿ ರೂಪಿಸಿದ್ದ ಪಟ್ಟಿಯಲ್ಲಿ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ' ಕರಿಬಸವಯ್ಯನವರ ಹೆಸರನ್ನೂ ಸೇರಿಸಿತ್ತಾದರೂ ಕೆಲವು ಒಳ ಒಪಾಂದ ಅರ್ಥಾತ್ ಲಾಬಿಗಳಿಂದಾಗಿ ಕೆ.ಬಿ. ಪ್ರಶಸ್ತಿ ವಂಚಿತರಾದರೆಂದು ಅಲ್ಲಲ್ಲಿ ಕೇಳಿಬಂತು.ಅದೇ ರೀತಿ,'ನಾಟಕ ಅಕಾಡೆಮಿ'ಯೂ ಕೂಡ ಕರಿಬಸವಯ್ಯನವರನ್ನ ನಿರ್ಲಕ್ಷಿಸಿತೆಂದೇ ಹೇಳಬಹುದು.ಯಾರು ಪ್ರಶಸ್ತಿ ಕೊಟ್ಟರೂ,ಕೊಡದಿದ್ದರೂ ಕೆ.ಬಿ.ಯಂತಹ ಮಹಾನ್ ಕಲಾ ತಪಸ್ವಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋದರು.ಅಷ್ಟು ಸಾಕು.
'ರೂಪಾಂತರ' ಸಂಸ್ಥೆ ಕೆ.ಬಿ.ಯಾರ ಹೆಸರಿನಲ್ಲಿ ಒಂದು ರಂಗ ಪುರಸ್ಕ್ರಾರ ನೀಡುವ ಉದಾತ್ತ ಯೋಜನೆ ಕೈಗೊಂಡಿರುವುದು ನಿಜಕ್ಕೂ ಒಳ್ಳೆಯ ಆಲೋಚನೆ.ಅದೇ ರೀತಿ ಅವರ ಹೆಸರಿನಲ್ಲಿ ನಾಟಕೋತ್ಸವದಂತಹ ಸ್ವಾಗತಾರ್ಹ ಯೋಜನೆಗಳನ್ನೂ ರೂಪಿಸುತ್ತಿರುವುದು ಮೆಚ್ಚುವಂಥದ್ದು.ಒಳಜಗಳಗಳಲ್ಲಿಯೇ ಮುಳುಗಿರುವ ಸೋ ಕಾಲ್ಡ್ ಸರ್ಕಾರ ಕಲಾವಿದರಿಗೆ ಗೌರವ ನೀಡುವುದನ್ನ 'ರೂಪಾಂತರ'ದವರಿಂದ ಕಲಿತುಕೊಳ್ಳಲಿ.ನಾಯಕ ನಟರು ಸತ್ತಾಗ ವಹಿಸುವ ಕಾಳಜಿ ಪೋಷಕ ನಟರ ಮೇಲೂ ಇರಲಿ.
ನೆಲಮಂಗಲ ಸಮೀಪದ ಕೊಡಿಗೆಹಳ್ಳಿಯಿಂದ ಕನಸುಗಳ ಬುತ್ತಿಯನ್ನು ಹೆಗಲಿಗೇರಿಸಿಕೊಂಡು ಬೆಂಗಳೂರಿನ ಬೀದಿಗಳಲ್ಲಿ ತಿರುಗುತ್ತಿದ್ದ ಕರಿಬಸವಯ್ಯನವರಿಗೆ ಮೊದಲು ಕೈ ಹಿಡಿದಿದ್ದು ರಂಗಭೂಮಿ.ಮೊದಲೆಲ್ಲ ಚಿಕ್ಕ ಚಿಕ್ಕ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಇವರು ಆ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ಮೂಲಕ ಹಿರಿಯ ರಂಗತಜ್ಞರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಕ್ರಮೇಣ ಪ್ರಮುಖ ಪಾತ್ರಗಳು ಇವರನ್ನು ಹುಡುಕಿಕೊಂಡು ಬರತೊಡಗಿದವು.೧೯೮೯ ರಲ್ಲಿ 'ರೂಪಾಂತರ'ಕ್ಕೆ ಸೇರಿದ ನಂತರವಂತೂ ಕರಿಬಸವಯ್ಯನವರ ಇಮೇಜೇ ಬದಲಾಗತೊಡಗಿತು.
ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.'ತಲೆದಂಡ' ನಾಟಕದ ಬಸವಣ್ಣನ ಪಾತ್ರವಿರಬಹುದು,'ಮುಸ್ಸಂಜೆಯ ಕಥಾ ಪ್ರಸಂಗ'ದ ಬಸ್ಯನ ಪಾತ್ರವಿರಬಹುದು,'ಕರ್ವಾಲೋ'ದ ಬಿರಿಯಾನಿ ಕರಿಯನ ಪಾತ್ರವಿರಬಹುದು,ಗಾಂಧೀ ಜಯಂತಿ,ಗುಣಮುಖ,ಬಡೇ ಸಾಬ್ ಪುರಾಣ,ಮಳೆ ಬೀಜ ಸೇರಿದಂತೆ ಅನೇಕ ನಾಟಕಗಳಲ್ಲಿ ಅವರು ನಿರ್ವಹಿಸಿದ ವಿಭಿನ್ನ ಪಾತ್ರಗಳಿರಬಹುದು-ಯಾವುದೇ ಪಾತ್ರವಿದ್ದರೂ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಿದ್ದಂತಹ ಅಪೂರ್ವ,ಅನನ್ಯ ಕಲಾವಿದ ಕರಿಬಸವಯ್ಯನವರು.
ಯಾವಾಗ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರೋ ಸಿನಿಮಾ ಮಂದಿಯ ಕಣ್ಣು ಕೆ.ಬಿ.ಯವರ ಕಡೆ ಹರಿಯಿತು.ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಮ್ಮ ನಿರ್ದೇಶನದ 'ಉಂಡು ಹೋದ ಕೊಂದು ಹೋದ'ಚಿತ್ರದಲ್ಲಿ ಅವಕಾಶ ನೀಡಿದರು.ಆ ಚಿತ್ರ ಯಾವಾಗ ಭರ್ಜರಿ ಯಶಸ್ಸು ಸಾಧಿಸಿತೋ ಕರಿಬಸವಯ್ಯನವರಿಗೆ ಅನೇಕ ಅತ್ಯುತ್ತಮ ಅವಕಾಶಗಳು ಬರತೊಡಗಿದವು.ಕೊಟ್ರೇಶಿ ಕನಸು,ಜನುಮದ ಜೋಡಿ,ಮುಂಗಾರಿನ ಮಿಂಚು,ಯಾರಿಗೆ ಸಾಲತ್ತೆ ಸಂಬಳ-ಚಿತ್ರಗಳನ್ನೊಳಗೊಂಡಂತೆ ಹತ್ತು ಹಲವು ಬಗೆಯ ಪಾತ್ರಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಹೆಜ್ಜೆ ಗುರುತು ಮೂಡಿಸುವಲ್ಲಿ ಯಶಸ್ವಿಯಾಗತೊಡಗಿದರು.
ಕರಿಬಸವಯ್ಯನವರು ಸ್ವಭಾವತಃ ತುಂಬ ಚುರುಕಿನ ಮನುಷ್ಯರಾಗಿದ್ದರು.ದಿನದ ಇಪ್ಪತ್ನಾಲ್ಕು ಗಂಟೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗಿ ಸದಾ ಲವಲವಿಕೆಯಿಂದಿರುತ್ತಿದ್ದರು. ಕೆ.ಬಿ.ಯವರ ಮತ್ತೊಂದು ಇಷ್ಟವಾಗುವ ಅಂಶವೆಂದರೆ ಎಂಥವರೊಂದಿಗೂ ಒಗ್ಗಿಬಿಡುವ,ಇಷ್ಟವಾಗಿಬಿಡುವ ವ್ಯಕ್ತಿತ್ವ.ತಾವೊಬ್ಬ ಪ್ರಸಿದ್ಧ ನಟನೆಂಬ ಕಿಂಚಿತ್ತು ಅಹಂಕಾರವಿಲ್ಲದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.ತಮ್ಮ ಕಾಯಕದಲ್ಲಿ ಸದಾ ದೇವರನ್ನು ಕಾಣಲೆತ್ನಿಸುತ್ತಿದ್ದರು.ಅವರ ಸರಳತೆ ಹಾಗು ಸಹೃದಯತೆಗೆ ಹಲವಾರು ಉದಾಹರಣೆ ಕೊಡಬಹುದು:ಹರಿಕಥೆ ನಡೆಸಿಕೊಡಬೇಕೆಂದು ಎಲ್ಲಿಂದ ಕರೆ ಬಂದರೂ ತಕ್ಷಣ ಹೊರಟುಬಿಡುತ್ತಿದ್ದರು,ಹಾಸ್ಯ ಕಾರ್ಯಕ್ರಮಗಲಿದ್ದರೂ ಅಷ್ಟೇ,ಬಿಡುವು ಸಿಕ್ಕಾಗೆಲ್ಲ ಉತ್ಸಾಹದಿಂದ ಭಾಗವಹಿಸಿ ನೆರೆದವರೆದುರು ತಮ್ಮ ಸ್ಫುಟವಾದ ಮಾತುಗಳ ಮೂಲಕ ನಗೆಯ ಹೊಳೆಯನ್ನೇ ಹರಿಸಿ ಬಿಡುತ್ತಿದ್ದರು.
ಸಿನಿಮಾ,ಕಿರುತೆರೆಗಳಲ್ಲಿ ತಾವೆಷ್ಟೇ ಬಿಜಿಯಾಗಿದ್ದರೂ ರಂಗಭೂಮಿಯ ಮೇಲೆ ಮಾತೃಸಂಬಂಧ ಹೊಂದಿದ್ದರೆಂಬುದಕ್ಕೆ ಸಾಕ್ಷಿ ಅವರು 'ರೂಪಾಂತರ'ದ ಜೊತೆ ಇಟ್ಟುಕೊಂಡಿದ್ದ ಭಾವನಾತ್ಮಕ ಸಂಬಂಧ.'ರೂಪಾಂತರ'ದ ಅಧ್ಯಕ್ಷರಾಗಿದ್ದ ಕರಿಬಸವಯ್ಯನವರು ಸಂಸ್ಥೆಯ ಏಳ್ಗೆಗಾಗಿ ಅವಿರತ ದುಡಿಯುತ್ತಿದ್ದರು.ಅನೇಕ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು.ಅವುಗಳಲ್ಲಿ ಮುಖ್ಯವಾಗಿ,'ರೂಪಾಂತರ'ದ ಕಲಾವಿದ,ತಂತ್ರಜ್ಞರಿಗೆ ಕೇಂದ್ರ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಆರ್ಥಿಕ ಸಹಾಯ ದೊರಕಿಸಿ ಕೊಡುವುದು,ಗ್ರಾಮೀಣ ಪ್ರದೇಶಗಳಲ್ಲಿ ಯಥೆಚ್ಚ್ಹವಾದ ರಂಗ ಚಟುವಟಿಕೆಗಳನ್ನ ಹಮ್ಮಿಕೊಂಡು ಯುವಕ-ಯುವತಿಯರಲ್ಲಿ ರಂಗಾಸಕ್ತಿ ಮೂಡಿಸುವುದು,ಹೊಸದಾಗಿ,ವಿಭಿನ್ನವಾಗಿ ಯೋಚಿಸುವ ಹೊಸತಲೆಮಾರಿನ ಯುವ ನಾಟಕಕಾರರಿಂದ ಹೊಸ ಬಗೆಯ ನಾಟಕಗಳನ್ನು ಬರೆಸಿ ರಂಗಕ್ಕೆ ತರುವುದು,ಹಾಗೆಯೇ ಹಿರುಯ ನಾಟಕಕಾರರ ನಾಟಕಗಳಲ್ಲಿನ ದಾರ್ಶನಿಕತೆ,ಜೀವನ ಪ್ರೀತಿ,ವ್ವೈಚಾರಿಕತೆ,ಮಾನವೀಯ ಸಂಬಂಧಗಳ ಕುರಿತು ಅರಿವು ಮೂಡಿಸುವುದು, ಸಮಾಜಮುಖಿಯಾಗಿರುವ ಕಥೆಗಳನ್ನು ಆರಿಸಿಕೊಂಡು ರಂಗರೂಪ ನೀಡುವುದು,ಹಾಗೂ ಕಳೆದ ದಶಕಗಳಲ್ಲಿ 'ರೂಪಾಂತರ' ಸಂಸ್ಥೆ ನಡೆದು ಬಂದ ದಾರಿಯನ್ನೂ,ಏರಿದ ಎತ್ತರವನ್ನೂ ಒಂದು ಕಡೆ ದಾಕ್ಯುಮೆಂಟಾಗಿಸುವುದು ಹಾಗು ನಂತರದ ತಲೆಮಾರಿನ ರಂಗಭೂಮಿಗೆ ಹೊಸ ದಿಕ್ಕು,ಹೊಸ ಚೇತನ ಒದಗಿಸಬೇಕೆಂದು ಕನಸು ಕಂಡಿದ್ದರು.
'ರೂಪಾಂತರ' ಸಂಸ್ಥೆಗೂ ಅಷ್ಟೇ,ಕೆ.ಬಿ.ಯವರೆಂದರೆ ಇನ್ನಿಲ್ಲದ ಪ್ರೀತಿ.ಮೂರು ವರ್ಷಗಳ ಹಿಂದೆಯಷ್ಟೇ ಕರಿಬಸವಯ್ಯನವರ ಜನ್ಮದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಕತ್ತಲಲ್ಲು ಯಶಸ್ಸಿನ ತ್ರಿಶೂಲ ಹಿಡಿದ ಕಥೆ' -ಎಂಬ ಹೆಸರಿನ ಅಭಿನಂದನಾ ಗ್ರಂಥ ಹೊರತರಲಾಯಿತು.ಕೆ.ಎಸ್.ಡಿ.ಎಲ್.ಚಂದ್ರು ಹಾಗು ನರೇಂದ್ರ ಬಾಬು ಈ ಕೃತಿಯ ಸಂಪಾದಕರು.ವಿಪರ್ಯಾಸವೆಂದರೆ ಅದೇ ರವೀಂದ್ರ ಕಲಾಕ್ಷೇತ್ರ ಆವರಣದ 'ಸಂಸ'ಬಯಲು ರಂಗಮಂದಿರದಲ್ಲೇ ಕೆ.ಬಿ.ಯವರಿಗೆ ಅಂತಿಮ ನಮನ ಸಲ್ಲಿಸಬೇಕಾದ ದುಃಖದ ಸ್ಥಿತಿ ಎದುರಾಯಿತು.
ಕನಕದಾಸರ 'ರಾಮಧಾನ್ಯ' ನಾಟಕ 'ರೂಪಾಂತರ'ದ ವತಿಯಿಂದ ಇಪ್ಪತ್ತ ನಾಲ್ಕು ಪ್ರದರ್ಶನ ಕಂಡಿತ್ತು.ಇಪ್ಪತ್ತೈದನೇ ಅದ್ಧೂರಿ ಪ್ರದಶನಕ್ಕಾಗಿ ಕರಿಬಸವಯ್ಯನವರು ತಂಡದೊಂದಿಗೆ ಸಮಾಲೋಚನೆ ನಡೆಸಿ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದರು.ಅಷ್ಟರಲ್ಲಿ ಅವರನ್ನು ಕಳೆದುಕೊಂಡಿದ್ದೇವೆ.ಇವರ ಮುಂದಾಳತ್ವದಲ್ಲಿ ಸಜ್ಜುಗೊಂಡಿದ್ದ ಇಟಗಿ ಈರಣ್ಣನವರ 'ಯಹೂದಿ ಹುಡುಗಿ' ನಾಟಕ ಕಳೆದ ವಾರವಷ್ಟೇ ಮುಂಬಯಿಯಲ್ಲಿ ನಡೆದ 'ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆ'ಯಲ್ಲಿ ಮೊದಲನೇ ಬಹುಮಾನ ಪಡೆದಿತ್ತಲ್ಲದೆ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.ಆ ಸುದ್ಧಿ ಕೇಳಿ ಕರಿಬಸವಯ್ಯ ಸಂತಸ ವ್ಯಕ್ತ ಪಡಿಸಿದ್ದರು.ಅದು ಹೆಚ್ಚು ಕಾಲ ಉಳಿಯಲಿಲ್ಲ.
ಇನ್ನು ಪ್ರಶಸ್ತಿಗಳ ವಿಷಯಕ್ಕೆ ಬಂದರೆ,ಕೆ.ಬಿ.ಯವರಿಗೆ 'ಕೊಟ್ರೇಶಿ ಕನಸು'ಚಿತ್ರದ ಅದ್ಭುತ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.ಆದರೂ ಇವರ ಪ್ರತಿಭೆಗೆ ಸಿಗಬೇಕಾದ ಗೌರವ,ಸ್ಥಾನಮಾನ ಸಿಗಲಿಲ್ಲವೆಂದೇ ಹೇಳಬಹುದು.ಕಳೆದ ಸಾಲಿನ 'ರಾಜ್ಯೋತ್ಸವ ಪ್ರಶಸ್ತಿ'ಗಾಗಿ ರೂಪಿಸಿದ್ದ ಪಟ್ಟಿಯಲ್ಲಿ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ' ಕರಿಬಸವಯ್ಯನವರ ಹೆಸರನ್ನೂ ಸೇರಿಸಿತ್ತಾದರೂ ಕೆಲವು ಒಳ ಒಪಾಂದ ಅರ್ಥಾತ್ ಲಾಬಿಗಳಿಂದಾಗಿ ಕೆ.ಬಿ. ಪ್ರಶಸ್ತಿ ವಂಚಿತರಾದರೆಂದು ಅಲ್ಲಲ್ಲಿ ಕೇಳಿಬಂತು.ಅದೇ ರೀತಿ,'ನಾಟಕ ಅಕಾಡೆಮಿ'ಯೂ ಕೂಡ ಕರಿಬಸವಯ್ಯನವರನ್ನ ನಿರ್ಲಕ್ಷಿಸಿತೆಂದೇ ಹೇಳಬಹುದು.ಯಾರು ಪ್ರಶಸ್ತಿ ಕೊಟ್ಟರೂ,ಕೊಡದಿದ್ದರೂ ಕೆ.ಬಿ.ಯಂತಹ ಮಹಾನ್ ಕಲಾ ತಪಸ್ವಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದು ಹೋದರು.ಅಷ್ಟು ಸಾಕು.
'ರೂಪಾಂತರ' ಸಂಸ್ಥೆ ಕೆ.ಬಿ.ಯಾರ ಹೆಸರಿನಲ್ಲಿ ಒಂದು ರಂಗ ಪುರಸ್ಕ್ರಾರ ನೀಡುವ ಉದಾತ್ತ ಯೋಜನೆ ಕೈಗೊಂಡಿರುವುದು ನಿಜಕ್ಕೂ ಒಳ್ಳೆಯ ಆಲೋಚನೆ.ಅದೇ ರೀತಿ ಅವರ ಹೆಸರಿನಲ್ಲಿ ನಾಟಕೋತ್ಸವದಂತಹ ಸ್ವಾಗತಾರ್ಹ ಯೋಜನೆಗಳನ್ನೂ ರೂಪಿಸುತ್ತಿರುವುದು ಮೆಚ್ಚುವಂಥದ್ದು.ಒಳಜಗಳಗಳಲ್ಲಿಯೇ ಮುಳುಗಿರುವ ಸೋ ಕಾಲ್ಡ್ ಸರ್ಕಾರ ಕಲಾವಿದರಿಗೆ ಗೌರವ ನೀಡುವುದನ್ನ 'ರೂಪಾಂತರ'ದವರಿಂದ ಕಲಿತುಕೊಳ್ಳಲಿ.ನಾಯಕ ನಟರು ಸತ್ತಾಗ ವಹಿಸುವ ಕಾಳಜಿ ಪೋಷಕ ನಟರ ಮೇಲೂ ಇರಲಿ.
"ಮಸಣದ ಹೂವಿಗೆ ಹಾಡಿನ ಕಾಣಿಕೆ"
'ಎಕ್ಕುಂಡಿಯವರ ಕೈ ಕುಲುಕುತ್ತಾ ...'
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ರಲ್ಲಿ ಜನಿಸಿ ೧೯೯೫ ರಲ್ಲಿ ಬೆಂಗಳೂರಿನಲ್ಲಿ ನಿಧನರಾದ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಸು.ರಂ. ಎಕ್ಕುಂಡಿ ಎಂದೇ ಪರಿಚಿತರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು ಕಾವ್ಯಕೃಷಿಯನ್ನು ಮಾಡುತ್ತಾ ಕನ್ನಡ ಸಾಹಿತ್ಯರಂಗ ದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಮೈಥಾಲಜಿ ಮತ್ತು ವರ್ತಮಾನಗಳ ನಡುವಣ ಜಿಜ್ಞಾಸೆಗಳಿಗೆ ಉತ್ತರ ಹುಡುಕುತ್ತಾ ಹೊರಟು ಹೊಸ ಚಿಂತನೆಗಳ ಹುಟ್ಟಿಗೆ ಕಾರಣಕರ್ತರಾದರು.
ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಲ್ಲಿ ವಿ.ಕೃ.ಗೋಕಾಕ್ ಹಾಗು ರಂ.ಶ್ರೀ. ಮುಗಳಿಯವರ ಶಿಷ್ಯನಾಗಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಸ್ವೀಕರಿಸಿ ಪಧವಿ ಪಡೆದವರು. ಕುತೂಹಲಕರ ಸಂಗತಿಯೆಂದರೆ, ವಿದ್ಯಾರ್ಥಿದೆಸೆಯಲ್ಲಿ ಗಂಗಾಧರ ಚಿತ್ತಾಲ ಇವರ ಸಹಪಾಠಿಯಾಗಿದ್ದರು. ಹೀಗೆ, ಸಾಹಿತ್ಯದ ಒಡನಾಡಿಗಳ ಒಡನಾಟದಲ್ಲಿದ್ದುಕೊಂಡು ತಮ್ಮೊಳಗಿನ ಸೃಜನಶೀಲತೆಗೆ ಕಾವು ಕೊಡುತ್ತಾ ಮುಂದೊಂದು ದಿನ ದೊಡ್ಡ ಸಾಹಿತಿಯಾಗಿ ರೂಪುಗೊಂಡರು.
ಕಾವ್ಯ, ಸಣ್ಣಕತೆಗಳನ್ನು ರಚಿಸುವುದರಲ್ಲಿ ನಿಸ್ಸೀಮರಾಗಿದ್ದ ಎಕ್ಕುಂಡಿಯವರು ಎರಡು ರಷ್ಯನ್ ಕಾದಂಬರಿಗಳನ್ನು ಕನ್ನಡಿಗರಿಗಾಗಿ ಅನುವಾದಿಸಿಕೊಟ್ಟಿದ್ದಾರೆ. ಬಕುಳದ ಹೂವುಗಳು, ಉಭಯ ಭಾರತಿ, ಸುಭದ್ರ, ಮತ್ಸ್ಯಗಂಧಿ, ಕಥನ ಕಾವ್ಯಗಳು, ಹಾವಾಡಿಗನ ಹುಡುಗಿ ಹಾಗೂ ಬೆಳ್ಳಕ್ಕಿಗಳು ಇವರ ಪ್ರಮುಖ ಕೃತಿಗಳು. ಬೆಳ್ಳಕ್ಕಿ ಹಿಂಡು ಎಕ್ಕುಂಡಿಯವರ ಸಮಗ್ರ ಕಾವ್ಯ. ತಮ್ಮ ಕವಿತೆಗಳ ಮೂಲಕ ಕನ್ನಡ ಕಾವ್ಯ ರಸಿಕರ ಗಮನ ಸೆಳೆದ ಸು.ರಂ. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿಯನ್ನು ನೀಡಿದ್ದರೆ, ಇವರ ಭೋದನಾ ಪ್ರತಿಭೆಯನ್ನು ಗೌರವಿಸು ನಿಟ್ಟಿನಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಸೋವಿಯತ್ ಲ್ಯಾಂಡ್ ಅವಾರ್ಡ್ಗಳು ಎಕ್ಕುಂಡಿಯವರ ಪಾಲಾಗಿವೆ. ಇಷ್ಟೊಂದು ಹಿನ್ನೆಲೆಯಿರುವ ಎಕ್ಕುಂಡಿಯವರ ಯಾವ ಕಾಣಿಕೆ ನೀಡಲಿ ಕವಿತೆಯು ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ ಚಿತ್ರಗೀತೆಯಾಗಿದೆ. ವಿಜಯ್ಭಾಸ್ಕರ್ ರಾಗ ಸಂಯೋಜನೆಯುಳ್ಳ ಈ ಗೀತೆಗೆ ಡಾ|| ಎಸ್.ಪಿ. ಬಾಲಸುಬ್ರಮಣ್ಯಂ ರವರು ಧ್ವನಿಯಾಗಿದ್ದಾರೆ. ೧೯೮೫ರಲ್ಲಿ ತೆರೆಕಂಡ ಮಸಣದ ಹೂವು ಈ ಗೀತೆ ಸಂಗೀತ ಪ್ರಿಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಅಂಶ ಎಕ್ಕುಂಡಿಯವರ ಭಾವನೆಗಳ ಜೀವಂತಿಕೆಯನ್ನು ಎತ್ತಿಹಿಡಿಯುತ್ತದೆ.
'ಪುಟ್ಟಣ್ಣನ ಸ್ಪಷ್ಟ ನಿಲುವು'
ಕನ್ನಡ ಕಾದಂಬರಿಗಳನ್ನು ತೆರೆಮೇಲೆ ತಂದು ಹೊಸ ಅಲೆ ಸೃಷ್ಠಿಸಿದ ಕಣಗಾಲ್ ಪುಟ್ಟಣ್ಣನವರು ಕನ್ನಡ ಚಿತ್ರರಂಗದ ಅನರ್ಘ್ಯರತ್ನ. ಕಾವ್ಯ, ಕಥೆ, ನಾಟಕ ಹಾಗೂ ಕಾದಂಬರಿಗಳ ಅಧ್ಯಯನದ ಅನಿವಾರ್ಯತೆ ಒಬ್ಬ ಚಿತ್ರ ನಿರ್ದೇಶಕನಿಗೆ ಎಷ್ಟು ಅವಶ್ಯಕ ಎನ್ನುವುದನ್ನು ಪುಟ್ಟಣ್ಣನವರು ತೋರಿಸಿಕೊಟ್ಟವರು. ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ಪ್ರಸಿದ್ಧ ಕವಿಗಳ ಗೀತೆಗಳನ್ನು ಬಳಸಿಕೊಂಡು ಚಿತ್ರದ ಸಂಗೀತದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಪ್ರೇಕ್ಷಕನ ಮನಸ್ಸಿಗೆ ಮುದನೀಡುವುದರ ಬಗ್ಗೆ ನಮ್ಮ ನಾಡಿನ ಸಾಹಿತ್ಯ ಜನರಿಗೆ ತಲುಪುವುದಕ್ಕೂ ಸಹಕರಿಸಿದವರು.
ಇತ್ತೀಚಿನ ದಿನಗಳಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ - ಹೀಗೆ ಉದ್ದವಾದ ಪಟ್ಟಿಯ ಕೆಳಗೆ ತಮ್ಮ ಹೆಸರನ್ನು ಲಗತ್ತಿಸಿ ಪ್ರೇಕ್ಷಕನ ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸ್ವಯಂಘೋಷಿತ ಬುದ್ಧಿವಂತರ ನಡುವೆ ಪುಟ್ಟಣ್ಣನಂತಹ ನಿಜವಾದ ಕ್ರಿಯಾಶೀಲ ವ್ಯಕ್ತಿ ವಿಶೇಷವಾಗಿ ನಿಂತು ಮಾದರಿಯಾಗುತ್ತಾರೆ. ದೊಡ್ಡ ನಿರ್ದೇಶಕನಾಗಬೇಕೆನ್ನುವ ಹಂಬಲದ ಜೊತೆಗೆ ಅಧ್ಯಯನವೂ ಮುಖ್ಯ ಎಂದು ಪರೋಕ್ಷವಾಗಿ ಸಾರುತ್ತಾರೆ.
ತಾವು ಬರೆದದ್ದೇ ಕಥೆ, ಮಾಡಿದ್ದೇ ಸಿನಿಮಾ ಎಂಬೆಲ್ಲಾ ಭ್ರಮೆಗಳೊಂದಿಗೆ ಜೀವಿಸುತ್ತಿರುವ ಪ್ರಚಾರಪ್ರಿಯರ ನಡುವೆ ಪುಟ್ಟಣ್ಣ ನಿಜಕ್ಕೂ ದೊಡ್ಡ ವ್ಯಕ್ತಿಯಾಗುತ್ತಾರೆ. ನೀವೇ ಹೇಳಿ, ಇವತ್ತಿನ ಎಷ್ಟುಜನ ನಿರ್ದೇಶಕರಿಗೆ ಕಾದಂಬರಿ ಓದುವ ಹವ್ಯಾಸವಿದೆ, ಕಾವ್ಯಾಧ್ಯಯನದ ಉತ್ಸಾಹವಿದೆ ? ಹತ್ತು ಸಿ.ಡಿ. ನೋಡಿ ಒಂದು ಕಥೆ ಸಿದ್ಧಪಡಿಸುವ ಇಂತಹವರಿಂದ ಪ್ರೇಕ್ಷಕ ಏನು ತಾನೇ ನಿರೀಕ್ಷಿಸುತ್ತಾನೆ. ಉತ್ತಮ ಕತೆಗಾರರನ್ನು ಹತ್ತಿರ ಸೇರಿಸಿಕೊಳ್ಳದೇ ತನ್ನ ಸುತ್ತಮುತ್ತಲಿನವರ ಮೇಲೆ ನಂಬಿಕೆಯಿಟ್ಟು ಅಪ್ರಬುದ್ಧ ನಿರ್ದೇಶಕರಿಗೆ ಅವಕಾಶ ಕೊಟ್ಟು ಎಕ್ಕುಟ್ಟಿಹೋಗುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ಇವರೆಲ್ಲಾ ಒಮ್ಮೆ ಪುಟ್ಟಣ್ಣ ಕಣಗಾಲ್ರವರನ್ನು ನೆನಪಿಸಿಕೊಂಡರೆ ಬುದ್ಧಿ ಬರಬಹುದು. ಹತ್ತು ಸಿ.ಡಿ. ನೋಡುವ ಬದಲಾಗಿ ಒಂದು ಕಾದಂಬರಿ ಓದುವುದರ ಉಪಯೋಗದ ಅರಿವು ಗೊತ್ತಾಗಬಹುದು. ಸಿನಿಮಾ ಎನ್ನುವುದು ಎರಡೂವರೆ ಗಂಟೆಗಳ ಕಾಲ ಸುತ್ತಿಬಿಡುವ ರೀಲಾಗಬಾರದು. ಎರಡೂವರೆ, ಮೂರೂವರೆ ದಶಕಗಳಾದರೂ ಮತ್ತೇ ಮತ್ತೇ ನೋಡಬೇಕೆನಿಸುವ ಜೀವಂತ ಕೃತಿಯಾಗಬೇಕು.
ಇನ್ನುಮುಂದೆಯಾದರೂ ಪುಟ್ಟಣ್ಣವರಂತ ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿಯ, ನಮ್ಮ ಜೀವನಕ್ಕೆ ಹತ್ತಿರವಾದ ಕಥೆಗಳು ಚಿತ್ರಗಳಾಗಲಿ. ನಮ್ಮ ಸಾಹಿತಿಗಳ ಕಾದಂಬರಿಗಳು ತೆರೆಯ ಮೇಲೆ ಮೂಡಲಿ. ಹಾಳೂರಿಗೆ ಉಳಿದವನೇ ಗೌಡ ಎನ್ನುವ ಗಾದೆ ಸುಳ್ಳಾಗಲಿ. ಪ್ರಜ್ಞಾವಂತ, ಕ್ರಿಯಾಶೀಲ ನಿರ್ದೇಶಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಲಿ ಅವರಿಗೆ ಸದಭಿರುಚಿ ನಿರ್ಮಾಪಕರು ಸಾಥ್ ನೀಡಲಿ. ನಮ್ಮೆಲರಿಗೂ ಪುಟ್ಟಣ್ಣವರಿಗಿದ್ದ ಕಾದಂಬರಿ ಪ್ರೇಮ, ಸತ್ಯದ ಮೇಲಿನ ನಂಬಿಕೆ ಮನದಟ್ಟಾಗಲಿ, ಮಾದರಿಯಾಗಲಿ.
'ಎಕ್ಕುಂಡಿಯವರ ಕಲ್ಪನಾಲೋಕ'
ತನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಬೇಕಾದ ಸಂದರ್ಭದಲ್ಲಿ ನಾಯಕನ ಎದೆಯಾಳದಲ್ಲಿ ಮೂಡುವ ಭಾವನೆಗಳಿಗೆ ಸು.ರಂ. ಎಕ್ಕುಂಡಿಯವರ ಕವಿತೆ ಔಚಿತ್ಯಪೂರ್ಣವಾಗಿದೆ.
ಕವಿ ತನ್ನೊಳಗಿನ ರಮ್ಯಲೋಕವನ್ನು ನಮಗೆ ತೋರಿಸುವ ಪ್ರಯತ್ನ ಈ ಗೀತೆಯಲ್ಲಿದೆ. ಪ್ರೀತಿಗೆ ಮಿಗಿಲಾದ ಕಾಣಿಕೆ ಇಲ್ಲ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರೇಯಸಿಗೆ ಯಾವ ಉಡುಗೊರೆ ನೀಡಿದರೂ ಕಮ್ಮಿಯೇ ! ಈ ಸತ್ಯ ಎಕ್ಕುಂಡಿಯವರ ಕವಿ ಮನಸ್ಸಿಗೆ ಅರಿವಾಗಿದೆ, ಅದರ ಪರಿಣಾಮವೇ ಯಾವ ಕಾಣಿಕೆ ನೀಡಲಿ ನಿನಗೆ ಹಾಡು.ಯಾವ ಕಾಣಿಕೆ ನೀಡಲಿ ನಿನಗೆ ಓ ನನ್ನ ಪ್ರೇಯಸಿ ಎಂದು ಪ್ರಶ್ನಿಸುವ ಮೂಲಕ ಹಾಡು ಆರಂಭವಾಗುತ್ತದೆ. ತಾನು ನೀಡಬೇಕಾದ ಕಾಣಿಕೆ ಎಷ್ಟು ಅರ್ಥಪೂರ್ಣವಾಗಿರಬೇಕು ಎಂಬ ಪ್ರಶ್ನೆಯೂ ಈ ಸಾಲಿನಲ್ಲಿ ಧ್ವನಿಸುತ್ತದೆ ಅಥವಾ ತನಗೆ ಯಾವ ಕಾಣಿಕೆ ಬೇಕೆಂಬುದನ್ನು ತನ್ನವಳೇ ಹೇಳಲಿ ಎಂಬ ಆಶಯವೂ ತಲೆದೋರುತ್ತದೆ.
ಮಲೆನಾಡ ಕಣಿವೆಗಳ ಹಸಿರುಬನದಿಂದ ಗಿಣಿಯನ್ನು ತಂದುಕೊಡಲಾರೆ ಎಂದು ಕವಿ ಮುಂದುವರೆಸುತ್ತಾರೆ. ಹಾಗೊಂದುವೇಳೆ ಅದನ್ನು ತಂದು ನೀಡಿದರೆ ತನ್ನ ಆಶಯ ಪೂರ್ತಿಯಾಗದು ಎಂಬ ಗೂಢಾರ್ಥವೂ ಅಲ್ಲಿ ಅಡಗಿರಬಹುದು. ಹಾಗೆಯೇ, ಸಮುದ್ರದ ಅಲೆಗಳ ಮೇಲೆ ಉಯ್ಯಾಲೆಯಂತೆ ತೂಗುವ ಹಂಸನಾವೆಯನ್ನು ತರಲಾರೆ ಎನ್ನುತ್ತಾರೆ. ಇಲ್ಲಿ, ಕವಿ ಹಂಸವನ್ನು ನಾವೆಗೆ ಹೋಲಿಸಿ ತಮ್ಮ ಕಾವ್ಯಶಕ್ತಿಯನ್ನು ಮೆರೆದಿದ್ದಾರೆ. ಹಕ್ಕಿಗಳು ಹಾಡುವಾಗ ಧ್ವನಿಗೂಡಿಸು ವಂತಿರುವ ಮಂದಾನಿಲದ ವೀಣೆಯನ್ನು ತರಲಾರೆನೆಂದು ಹೇಳುತ್ತಾರೆ. ಮಂದಾನಿಲದ ವೀಣೆಯ ಪ್ರಯೋಗ ವಿಶೇಷವಾಗಿ ಗಮನ ಸೆಳೆಯುತ್ತದೆ. ನಂದನವನದಲ್ಲಿ ಅರಳಿನಿಂತು ಮಕರಂದ ಬೀರುವ ಮಂದಾರಪುಷ್ಪವನ್ನು ತರಲಾರೆನೆಂದು ಹೇಳುವ ಮೂಲಕ ಕವಿ ವಾಸ್ತವಾಂಶವನ್ನು ಗಮನದಲ್ಲಿಟ್ಟುಕೊಂಡೂ, ತಾನು ಏನೇ ಉಡುಗೊರೆ ನೀಡಿದರೂ ಕಡಿಮೆಯೇ ಎಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತಾರೆ.
ಎಷ್ಟೋ ರಾಣಿಯರನ್ನು ತನ್ನ ಹೆಗಲಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ಎಲ್ಲರ ಗಮನ ಸೆಳೆದಿರುವ ಮುತ್ತಿನ ಪಲ್ಲಕ್ಕಿಯನ್ನೂ ತರಲಾರೆ ಎನ್ನುತ್ತಾರೆ. ಅಂತೆಯೇ, ಸೂರ್ಯ-ಚಂದ್ರರನ್ನೂ ತರಲಾರೆ ಎಂದು ಹೇಳುವ ಮೂಲಕ ಹಾಡಿಗೊಂದು ಅಂತ್ಯ ನೀಡುತ್ತಾರೆ.
ಇಲ್ಲಿ ನಾವು ಗಮನಿಸಬೇಕಾದ ಮುಖ್ಯಾಂಶವೆಂದರೆ, ಕವಿ ತನ್ನ ಕಲ್ಪನಾಲಹರಿಯಲ್ಲಿ ಏನೆಲ್ಲಾ ಕಲ್ಪಿಸಿಕೊಂಡರೂ ವಾಸ್ತವ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅಸಾಧ್ಯವಾದುದನ್ನೆಲ್ಲಾ ಹಾಡಿನಲ್ಲಿ ಹಾಡಲಷ್ಟೇ ಚೆಂದ. ಆದರೆ, ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಏನೇ ಆಗಲೀ, ಇಂಥದ್ದೊಂದು ಅದ್ಭುತಗೀತೆ ನಮಗಾಗಿ ನೀಡಿದ ಸು.ರಂ. ಎಕ್ಕುಂಡಿಯವರಿಗೆ ಧನ್ಯವಾದ ಸಲ್ಲಿಸೋಣ.
'ಯಾವ ಕಾಣಿಕೆ ನೀಡಲಿ ನಿನಗೆ'
ಯಾವ ಕಾಣಿಕೆ ನೀಡಲಿ ನಿನಗೆ
ಓ ನನ್ನ ಪ್ರೇಯಸಿ ?
ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಣಿಯೊಂದ ನಾ ತರಲಾರೆ,
ಸಾಗರದ ಅಲೆಗಳಲ್ಲಿ ಉಯ್ಯಾಲೆಯಾಡಿರುವ
ಹಂಸನಾವೆಯ ನಾ ತರಲಾರೆ !
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ,
ನಂದನವನದ ಮಂದಾರಪುಷ್ಪವ
ನಾ ನಿನಗೆ ತರಲಾರೆ !
ಹಲವು ಅರಸಿಯರ ಹೊತ್ತುಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ,
ಮಣ್ಣಿನಲಿ ನೀರಿನಲ್ಲಿ ಬದುಕನೆ ಸವೆಸಿರುವ
ಸೂರ್ಯಚಂದ್ರರ ನಾ ತರಲಾರೆ !
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ರಲ್ಲಿ ಜನಿಸಿ ೧೯೯೫ ರಲ್ಲಿ ಬೆಂಗಳೂರಿನಲ್ಲಿ ನಿಧನರಾದ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರು ಸು.ರಂ. ಎಕ್ಕುಂಡಿ ಎಂದೇ ಪರಿಚಿತರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು ಕಾವ್ಯಕೃಷಿಯನ್ನು ಮಾಡುತ್ತಾ ಕನ್ನಡ ಸಾಹಿತ್ಯರಂಗ ದಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಿಟ್ಟಿಸಿಕೊಂಡವರು. ಮೈಥಾಲಜಿ ಮತ್ತು ವರ್ತಮಾನಗಳ ನಡುವಣ ಜಿಜ್ಞಾಸೆಗಳಿಗೆ ಉತ್ತರ ಹುಡುಕುತ್ತಾ ಹೊರಟು ಹೊಸ ಚಿಂತನೆಗಳ ಹುಟ್ಟಿಗೆ ಕಾರಣಕರ್ತರಾದರು.
ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿಲ್ಲಿ ವಿ.ಕೃ.ಗೋಕಾಕ್ ಹಾಗು ರಂ.ಶ್ರೀ. ಮುಗಳಿಯವರ ಶಿಷ್ಯನಾಗಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಸ್ವೀಕರಿಸಿ ಪಧವಿ ಪಡೆದವರು. ಕುತೂಹಲಕರ ಸಂಗತಿಯೆಂದರೆ, ವಿದ್ಯಾರ್ಥಿದೆಸೆಯಲ್ಲಿ ಗಂಗಾಧರ ಚಿತ್ತಾಲ ಇವರ ಸಹಪಾಠಿಯಾಗಿದ್ದರು. ಹೀಗೆ, ಸಾಹಿತ್ಯದ ಒಡನಾಡಿಗಳ ಒಡನಾಟದಲ್ಲಿದ್ದುಕೊಂಡು ತಮ್ಮೊಳಗಿನ ಸೃಜನಶೀಲತೆಗೆ ಕಾವು ಕೊಡುತ್ತಾ ಮುಂದೊಂದು ದಿನ ದೊಡ್ಡ ಸಾಹಿತಿಯಾಗಿ ರೂಪುಗೊಂಡರು.
ಕಾವ್ಯ, ಸಣ್ಣಕತೆಗಳನ್ನು ರಚಿಸುವುದರಲ್ಲಿ ನಿಸ್ಸೀಮರಾಗಿದ್ದ ಎಕ್ಕುಂಡಿಯವರು ಎರಡು ರಷ್ಯನ್ ಕಾದಂಬರಿಗಳನ್ನು ಕನ್ನಡಿಗರಿಗಾಗಿ ಅನುವಾದಿಸಿಕೊಟ್ಟಿದ್ದಾರೆ. ಬಕುಳದ ಹೂವುಗಳು, ಉಭಯ ಭಾರತಿ, ಸುಭದ್ರ, ಮತ್ಸ್ಯಗಂಧಿ, ಕಥನ ಕಾವ್ಯಗಳು, ಹಾವಾಡಿಗನ ಹುಡುಗಿ ಹಾಗೂ ಬೆಳ್ಳಕ್ಕಿಗಳು ಇವರ ಪ್ರಮುಖ ಕೃತಿಗಳು. ಬೆಳ್ಳಕ್ಕಿ ಹಿಂಡು ಎಕ್ಕುಂಡಿಯವರ ಸಮಗ್ರ ಕಾವ್ಯ. ತಮ್ಮ ಕವಿತೆಗಳ ಮೂಲಕ ಕನ್ನಡ ಕಾವ್ಯ ರಸಿಕರ ಗಮನ ಸೆಳೆದ ಸು.ರಂ. ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿಯನ್ನು ನೀಡಿದ್ದರೆ, ಇವರ ಭೋದನಾ ಪ್ರತಿಭೆಯನ್ನು ಗೌರವಿಸು ನಿಟ್ಟಿನಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜೊತೆಗೆ ಸೋವಿಯತ್ ಲ್ಯಾಂಡ್ ಅವಾರ್ಡ್ಗಳು ಎಕ್ಕುಂಡಿಯವರ ಪಾಲಾಗಿವೆ. ಇಷ್ಟೊಂದು ಹಿನ್ನೆಲೆಯಿರುವ ಎಕ್ಕುಂಡಿಯವರ ಯಾವ ಕಾಣಿಕೆ ನೀಡಲಿ ಕವಿತೆಯು ಎಸ್.ಆರ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಚಿತ್ರದಲ್ಲಿ ಚಿತ್ರಗೀತೆಯಾಗಿದೆ. ವಿಜಯ್ಭಾಸ್ಕರ್ ರಾಗ ಸಂಯೋಜನೆಯುಳ್ಳ ಈ ಗೀತೆಗೆ ಡಾ|| ಎಸ್.ಪಿ. ಬಾಲಸುಬ್ರಮಣ್ಯಂ ರವರು ಧ್ವನಿಯಾಗಿದ್ದಾರೆ. ೧೯೮೫ರಲ್ಲಿ ತೆರೆಕಂಡ ಮಸಣದ ಹೂವು ಈ ಗೀತೆ ಸಂಗೀತ ಪ್ರಿಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಅಂಶ ಎಕ್ಕುಂಡಿಯವರ ಭಾವನೆಗಳ ಜೀವಂತಿಕೆಯನ್ನು ಎತ್ತಿಹಿಡಿಯುತ್ತದೆ.
'ಪುಟ್ಟಣ್ಣನ ಸ್ಪಷ್ಟ ನಿಲುವು'
ಕನ್ನಡ ಕಾದಂಬರಿಗಳನ್ನು ತೆರೆಮೇಲೆ ತಂದು ಹೊಸ ಅಲೆ ಸೃಷ್ಠಿಸಿದ ಕಣಗಾಲ್ ಪುಟ್ಟಣ್ಣನವರು ಕನ್ನಡ ಚಿತ್ರರಂಗದ ಅನರ್ಘ್ಯರತ್ನ. ಕಾವ್ಯ, ಕಥೆ, ನಾಟಕ ಹಾಗೂ ಕಾದಂಬರಿಗಳ ಅಧ್ಯಯನದ ಅನಿವಾರ್ಯತೆ ಒಬ್ಬ ಚಿತ್ರ ನಿರ್ದೇಶಕನಿಗೆ ಎಷ್ಟು ಅವಶ್ಯಕ ಎನ್ನುವುದನ್ನು ಪುಟ್ಟಣ್ಣನವರು ತೋರಿಸಿಕೊಟ್ಟವರು. ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ಪ್ರಸಿದ್ಧ ಕವಿಗಳ ಗೀತೆಗಳನ್ನು ಬಳಸಿಕೊಂಡು ಚಿತ್ರದ ಸಂಗೀತದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಪ್ರೇಕ್ಷಕನ ಮನಸ್ಸಿಗೆ ಮುದನೀಡುವುದರ ಬಗ್ಗೆ ನಮ್ಮ ನಾಡಿನ ಸಾಹಿತ್ಯ ಜನರಿಗೆ ತಲುಪುವುದಕ್ಕೂ ಸಹಕರಿಸಿದವರು.
ಇತ್ತೀಚಿನ ದಿನಗಳಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ - ಹೀಗೆ ಉದ್ದವಾದ ಪಟ್ಟಿಯ ಕೆಳಗೆ ತಮ್ಮ ಹೆಸರನ್ನು ಲಗತ್ತಿಸಿ ಪ್ರೇಕ್ಷಕನ ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸ್ವಯಂಘೋಷಿತ ಬುದ್ಧಿವಂತರ ನಡುವೆ ಪುಟ್ಟಣ್ಣನಂತಹ ನಿಜವಾದ ಕ್ರಿಯಾಶೀಲ ವ್ಯಕ್ತಿ ವಿಶೇಷವಾಗಿ ನಿಂತು ಮಾದರಿಯಾಗುತ್ತಾರೆ. ದೊಡ್ಡ ನಿರ್ದೇಶಕನಾಗಬೇಕೆನ್ನುವ ಹಂಬಲದ ಜೊತೆಗೆ ಅಧ್ಯಯನವೂ ಮುಖ್ಯ ಎಂದು ಪರೋಕ್ಷವಾಗಿ ಸಾರುತ್ತಾರೆ.
ತಾವು ಬರೆದದ್ದೇ ಕಥೆ, ಮಾಡಿದ್ದೇ ಸಿನಿಮಾ ಎಂಬೆಲ್ಲಾ ಭ್ರಮೆಗಳೊಂದಿಗೆ ಜೀವಿಸುತ್ತಿರುವ ಪ್ರಚಾರಪ್ರಿಯರ ನಡುವೆ ಪುಟ್ಟಣ್ಣ ನಿಜಕ್ಕೂ ದೊಡ್ಡ ವ್ಯಕ್ತಿಯಾಗುತ್ತಾರೆ. ನೀವೇ ಹೇಳಿ, ಇವತ್ತಿನ ಎಷ್ಟುಜನ ನಿರ್ದೇಶಕರಿಗೆ ಕಾದಂಬರಿ ಓದುವ ಹವ್ಯಾಸವಿದೆ, ಕಾವ್ಯಾಧ್ಯಯನದ ಉತ್ಸಾಹವಿದೆ ? ಹತ್ತು ಸಿ.ಡಿ. ನೋಡಿ ಒಂದು ಕಥೆ ಸಿದ್ಧಪಡಿಸುವ ಇಂತಹವರಿಂದ ಪ್ರೇಕ್ಷಕ ಏನು ತಾನೇ ನಿರೀಕ್ಷಿಸುತ್ತಾನೆ. ಉತ್ತಮ ಕತೆಗಾರರನ್ನು ಹತ್ತಿರ ಸೇರಿಸಿಕೊಳ್ಳದೇ ತನ್ನ ಸುತ್ತಮುತ್ತಲಿನವರ ಮೇಲೆ ನಂಬಿಕೆಯಿಟ್ಟು ಅಪ್ರಬುದ್ಧ ನಿರ್ದೇಶಕರಿಗೆ ಅವಕಾಶ ಕೊಟ್ಟು ಎಕ್ಕುಟ್ಟಿಹೋಗುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ಇವರೆಲ್ಲಾ ಒಮ್ಮೆ ಪುಟ್ಟಣ್ಣ ಕಣಗಾಲ್ರವರನ್ನು ನೆನಪಿಸಿಕೊಂಡರೆ ಬುದ್ಧಿ ಬರಬಹುದು. ಹತ್ತು ಸಿ.ಡಿ. ನೋಡುವ ಬದಲಾಗಿ ಒಂದು ಕಾದಂಬರಿ ಓದುವುದರ ಉಪಯೋಗದ ಅರಿವು ಗೊತ್ತಾಗಬಹುದು. ಸಿನಿಮಾ ಎನ್ನುವುದು ಎರಡೂವರೆ ಗಂಟೆಗಳ ಕಾಲ ಸುತ್ತಿಬಿಡುವ ರೀಲಾಗಬಾರದು. ಎರಡೂವರೆ, ಮೂರೂವರೆ ದಶಕಗಳಾದರೂ ಮತ್ತೇ ಮತ್ತೇ ನೋಡಬೇಕೆನಿಸುವ ಜೀವಂತ ಕೃತಿಯಾಗಬೇಕು.
ಇನ್ನುಮುಂದೆಯಾದರೂ ಪುಟ್ಟಣ್ಣವರಂತ ನಮ್ಮ ಮಣ್ಣಿನ, ನಮ್ಮ ಸಂಸ್ಕೃತಿಯ, ನಮ್ಮ ಜೀವನಕ್ಕೆ ಹತ್ತಿರವಾದ ಕಥೆಗಳು ಚಿತ್ರಗಳಾಗಲಿ. ನಮ್ಮ ಸಾಹಿತಿಗಳ ಕಾದಂಬರಿಗಳು ತೆರೆಯ ಮೇಲೆ ಮೂಡಲಿ. ಹಾಳೂರಿಗೆ ಉಳಿದವನೇ ಗೌಡ ಎನ್ನುವ ಗಾದೆ ಸುಳ್ಳಾಗಲಿ. ಪ್ರಜ್ಞಾವಂತ, ಕ್ರಿಯಾಶೀಲ ನಿರ್ದೇಶಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಲಿ ಅವರಿಗೆ ಸದಭಿರುಚಿ ನಿರ್ಮಾಪಕರು ಸಾಥ್ ನೀಡಲಿ. ನಮ್ಮೆಲರಿಗೂ ಪುಟ್ಟಣ್ಣವರಿಗಿದ್ದ ಕಾದಂಬರಿ ಪ್ರೇಮ, ಸತ್ಯದ ಮೇಲಿನ ನಂಬಿಕೆ ಮನದಟ್ಟಾಗಲಿ, ಮಾದರಿಯಾಗಲಿ.
'ಎಕ್ಕುಂಡಿಯವರ ಕಲ್ಪನಾಲೋಕ'
ತನ್ನ ಪ್ರಿಯತಮೆಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಬೇಕಾದ ಸಂದರ್ಭದಲ್ಲಿ ನಾಯಕನ ಎದೆಯಾಳದಲ್ಲಿ ಮೂಡುವ ಭಾವನೆಗಳಿಗೆ ಸು.ರಂ. ಎಕ್ಕುಂಡಿಯವರ ಕವಿತೆ ಔಚಿತ್ಯಪೂರ್ಣವಾಗಿದೆ.
ಕವಿ ತನ್ನೊಳಗಿನ ರಮ್ಯಲೋಕವನ್ನು ನಮಗೆ ತೋರಿಸುವ ಪ್ರಯತ್ನ ಈ ಗೀತೆಯಲ್ಲಿದೆ. ಪ್ರೀತಿಗೆ ಮಿಗಿಲಾದ ಕಾಣಿಕೆ ಇಲ್ಲ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರೇಯಸಿಗೆ ಯಾವ ಉಡುಗೊರೆ ನೀಡಿದರೂ ಕಮ್ಮಿಯೇ ! ಈ ಸತ್ಯ ಎಕ್ಕುಂಡಿಯವರ ಕವಿ ಮನಸ್ಸಿಗೆ ಅರಿವಾಗಿದೆ, ಅದರ ಪರಿಣಾಮವೇ ಯಾವ ಕಾಣಿಕೆ ನೀಡಲಿ ನಿನಗೆ ಹಾಡು.ಯಾವ ಕಾಣಿಕೆ ನೀಡಲಿ ನಿನಗೆ ಓ ನನ್ನ ಪ್ರೇಯಸಿ ಎಂದು ಪ್ರಶ್ನಿಸುವ ಮೂಲಕ ಹಾಡು ಆರಂಭವಾಗುತ್ತದೆ. ತಾನು ನೀಡಬೇಕಾದ ಕಾಣಿಕೆ ಎಷ್ಟು ಅರ್ಥಪೂರ್ಣವಾಗಿರಬೇಕು ಎಂಬ ಪ್ರಶ್ನೆಯೂ ಈ ಸಾಲಿನಲ್ಲಿ ಧ್ವನಿಸುತ್ತದೆ ಅಥವಾ ತನಗೆ ಯಾವ ಕಾಣಿಕೆ ಬೇಕೆಂಬುದನ್ನು ತನ್ನವಳೇ ಹೇಳಲಿ ಎಂಬ ಆಶಯವೂ ತಲೆದೋರುತ್ತದೆ.
ಮಲೆನಾಡ ಕಣಿವೆಗಳ ಹಸಿರುಬನದಿಂದ ಗಿಣಿಯನ್ನು ತಂದುಕೊಡಲಾರೆ ಎಂದು ಕವಿ ಮುಂದುವರೆಸುತ್ತಾರೆ. ಹಾಗೊಂದುವೇಳೆ ಅದನ್ನು ತಂದು ನೀಡಿದರೆ ತನ್ನ ಆಶಯ ಪೂರ್ತಿಯಾಗದು ಎಂಬ ಗೂಢಾರ್ಥವೂ ಅಲ್ಲಿ ಅಡಗಿರಬಹುದು. ಹಾಗೆಯೇ, ಸಮುದ್ರದ ಅಲೆಗಳ ಮೇಲೆ ಉಯ್ಯಾಲೆಯಂತೆ ತೂಗುವ ಹಂಸನಾವೆಯನ್ನು ತರಲಾರೆ ಎನ್ನುತ್ತಾರೆ. ಇಲ್ಲಿ, ಕವಿ ಹಂಸವನ್ನು ನಾವೆಗೆ ಹೋಲಿಸಿ ತಮ್ಮ ಕಾವ್ಯಶಕ್ತಿಯನ್ನು ಮೆರೆದಿದ್ದಾರೆ. ಹಕ್ಕಿಗಳು ಹಾಡುವಾಗ ಧ್ವನಿಗೂಡಿಸು ವಂತಿರುವ ಮಂದಾನಿಲದ ವೀಣೆಯನ್ನು ತರಲಾರೆನೆಂದು ಹೇಳುತ್ತಾರೆ. ಮಂದಾನಿಲದ ವೀಣೆಯ ಪ್ರಯೋಗ ವಿಶೇಷವಾಗಿ ಗಮನ ಸೆಳೆಯುತ್ತದೆ. ನಂದನವನದಲ್ಲಿ ಅರಳಿನಿಂತು ಮಕರಂದ ಬೀರುವ ಮಂದಾರಪುಷ್ಪವನ್ನು ತರಲಾರೆನೆಂದು ಹೇಳುವ ಮೂಲಕ ಕವಿ ವಾಸ್ತವಾಂಶವನ್ನು ಗಮನದಲ್ಲಿಟ್ಟುಕೊಂಡೂ, ತಾನು ಏನೇ ಉಡುಗೊರೆ ನೀಡಿದರೂ ಕಡಿಮೆಯೇ ಎಂದು ಪರೋಕ್ಷವಾಗಿ ವ್ಯಕ್ತಪಡಿಸುತ್ತಾರೆ.
ಎಷ್ಟೋ ರಾಣಿಯರನ್ನು ತನ್ನ ಹೆಗಲಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಹೊರಟು ಎಲ್ಲರ ಗಮನ ಸೆಳೆದಿರುವ ಮುತ್ತಿನ ಪಲ್ಲಕ್ಕಿಯನ್ನೂ ತರಲಾರೆ ಎನ್ನುತ್ತಾರೆ. ಅಂತೆಯೇ, ಸೂರ್ಯ-ಚಂದ್ರರನ್ನೂ ತರಲಾರೆ ಎಂದು ಹೇಳುವ ಮೂಲಕ ಹಾಡಿಗೊಂದು ಅಂತ್ಯ ನೀಡುತ್ತಾರೆ.
ಇಲ್ಲಿ ನಾವು ಗಮನಿಸಬೇಕಾದ ಮುಖ್ಯಾಂಶವೆಂದರೆ, ಕವಿ ತನ್ನ ಕಲ್ಪನಾಲಹರಿಯಲ್ಲಿ ಏನೆಲ್ಲಾ ಕಲ್ಪಿಸಿಕೊಂಡರೂ ವಾಸ್ತವ ಅದಕ್ಕೆ ತದ್ವಿರುದ್ಧವಾಗಿರುತ್ತದೆ. ಅಸಾಧ್ಯವಾದುದನ್ನೆಲ್ಲಾ ಹಾಡಿನಲ್ಲಿ ಹಾಡಲಷ್ಟೇ ಚೆಂದ. ಆದರೆ, ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ಏನೇ ಆಗಲೀ, ಇಂಥದ್ದೊಂದು ಅದ್ಭುತಗೀತೆ ನಮಗಾಗಿ ನೀಡಿದ ಸು.ರಂ. ಎಕ್ಕುಂಡಿಯವರಿಗೆ ಧನ್ಯವಾದ ಸಲ್ಲಿಸೋಣ.
'ಯಾವ ಕಾಣಿಕೆ ನೀಡಲಿ ನಿನಗೆ'
ಯಾವ ಕಾಣಿಕೆ ನೀಡಲಿ ನಿನಗೆ
ಓ ನನ್ನ ಪ್ರೇಯಸಿ ?
ಮಲೆನಾಡ ಕಣಿವೆಗಳ ಹಸಿರು ಬನದಿಂದ
ನಿನಗಾಗಿ ಗಿಣಿಯೊಂದ ನಾ ತರಲಾರೆ,
ಸಾಗರದ ಅಲೆಗಳಲ್ಲಿ ಉಯ್ಯಾಲೆಯಾಡಿರುವ
ಹಂಸನಾವೆಯ ನಾ ತರಲಾರೆ !
ಹಕ್ಕಿಗಳ ಜತೆಗೆ ಸ್ವರವೆತ್ತಿ ಪಾಡಿರುವ
ಮಂದಾನಿಲದ ವೀಣೆಯ ತರಲಾರೆ,
ನಂದನವನದ ಮಂದಾರಪುಷ್ಪವ
ನಾ ನಿನಗೆ ತರಲಾರೆ !
ಹಲವು ಅರಸಿಯರ ಹೊತ್ತುಮೆರೆಸಿರುವ
ಮುತ್ತಿನ ಪಲ್ಲಕ್ಕಿಯ ನಾ ತರಲಾರೆ,
ಮಣ್ಣಿನಲಿ ನೀರಿನಲ್ಲಿ ಬದುಕನೆ ಸವೆಸಿರುವ
ಸೂರ್ಯಚಂದ್ರರ ನಾ ತರಲಾರೆ !
ಮಂಗಳವಾರ, ಆಗಸ್ಟ್ 16, 2011
ಪಾಚಿ ಮತ್ತು ವೀಚಿ
ಹಸಿವ ತಿಂದ ಈ
ನಿನ್ನ ಮುದ್ದುಮುಖ
ತೊಳೆದ ಬೆಳ್ಳಿ ತಟ್ಟೆ
ನಿದಿರೆ ಕೊಂದ ಈ
ಅವಳಿ ಕಣ್ಣುಗಳು
ಗುಡಿಯ ಜೋಡಿ ದೀಪ
ಜೋಮು ಹಿಡಿಸಿ ಜ್ವರ
ತಂದ ಕೆಂಗೆನ್ನೆ
ಬಂಗಿ ಬೆಳೆವ ಗುಡ್ಡ
ಮತ್ತು ನೀಡಿ ನರ
ಜಗ್ಗಿದಂಥ ತುಟಿ
ನೀರ ಸುರಿವ ವೃಕ್ಷ
ನನ್ನ ಹೂತಿಟ್ಟ
ಗುಪ್ತ ಆತ್ಮಗುಹೆ
ದೋಣಿ ಇರದ ದ್ವೀಪ
ಒಡೆದ ಬಾಳಿನಲಿ
ನಮಗೆ ಸರಿತಾಳೆ
ಪಾಚಿ ಮತ್ತು ವೀಚಿ
ನಿನ್ನ ಮುದ್ದುಮುಖ
ತೊಳೆದ ಬೆಳ್ಳಿ ತಟ್ಟೆ
ನಿದಿರೆ ಕೊಂದ ಈ
ಅವಳಿ ಕಣ್ಣುಗಳು
ಗುಡಿಯ ಜೋಡಿ ದೀಪ
ಜೋಮು ಹಿಡಿಸಿ ಜ್ವರ
ತಂದ ಕೆಂಗೆನ್ನೆ
ಬಂಗಿ ಬೆಳೆವ ಗುಡ್ಡ
ಮತ್ತು ನೀಡಿ ನರ
ಜಗ್ಗಿದಂಥ ತುಟಿ
ನೀರ ಸುರಿವ ವೃಕ್ಷ
ನನ್ನ ಹೂತಿಟ್ಟ
ಗುಪ್ತ ಆತ್ಮಗುಹೆ
ದೋಣಿ ಇರದ ದ್ವೀಪ
ಒಡೆದ ಬಾಳಿನಲಿ
ನಮಗೆ ಸರಿತಾಳೆ
ಪಾಚಿ ಮತ್ತು ವೀಚಿ
ಭಾನುವಾರ, ಆಗಸ್ಟ್ 14, 2011
ಚಡ್ಡಿ ಅಂಗಿ
ಚಡ್ಡಿ ಅಂಗಿ ತಾ ತೊಟ್ಟು ಬರಲು ರವಿ
ನಿತ್ಯ ಸೂರ್ಯಗ್ರಹಣ
ಜರಿ ಷರಾಯಿ ಕರಿ ಕೋಟು ಧರಿಸೆ ಶಶಿ
ಶರಧಿಗೆಲ್ಲಿ ಪ್ರಣಯ
ಬೆಟ್ಟ ಜಲಪಾತ ಹೂವು ಮುಡಿದ ಬುವಿ
ಬೆತ್ತಲಲ್ಲೆ ಮಾನಿ
ಬಿಚ್ಚಿ ಗರಿಗಣ್ಣ ಕುಣಿವ ಆ ನವಿಲು
ವಸ್ತ್ರ ಬಯಸಲಿಲ್ಲ
ತನ್ನ ಸಹಜತೆಗೆ ತನಗೆ ಹೆಗ್ಗಳಿಕೆ
ಸೃಷ್ಟಿಯೋ ಪ್ರಬುದ್ದ
ಮುಚ್ಚಿಕೊಳುವ ಭ್ರಮೆಯಲ್ಲಿ ನರಜಂತು
ಮೂರು ಬಿಟ್ಟು ನಿಂತ
ಶುಕ್ರವಾರ, ಜುಲೈ 29, 2011
ಕಸಿವಿಸಿ ಕನಸು
ಎತ್ತೆತ್ತಲು ಮೆತ್ತಿಹ ಮನುಜನ ಬಾಡು
ರಣಲೋಕದ ಕಿಡಿ ಕಿಡಿ ಸುಡುಗಾಡು
ಸೊಕ್ಕಿಗೆ ಸಿಕ್ಕಿ ದಿಕ್ಕೆಟ್ಟಿಹ ಜಗ
ಉರಿವುದು ಕಾಣದೊ ಮೃತ್ಯುವು ಧಗಧಗ
ಅಗ್ನಿಯ ಅಪ್ಪುಗೆ ಆವರಿಸೆ ಜಗವ
ದಿಕ್ಕೆಟ್ಟಿಹ ಗತ್ತಿಲ್ಲದ ಮಾನವ
ಮುಗಿಲಿಗು ನೆಲಕೂ ಅಂತರವಿಲ್ಲ
ಸಿಡಿಮದ್ದುಗಳುಗುಳುವ ಹೊಗೆಯೇ ಎಲ್ಲ
ಪಸರಿಸಲೆಲ್ಲೆಡೆ ಪರಮಾಣುವಿನಲೆ
ಗುರಿಗಳಿಲ್ಲದೆ ಗುಡಿಗಿಹ ಧಾಂದಲೆ
ಅಂಗಗಳೆರಚಿವೆ ಸುತ್ತಲ ನೆಲದಲಿ
ರಂಗವು ತುಂಬಿದೆ ರಂಗಿನ ದ್ರವದಲಿ
ಸಾಗರ ನಿಲ್ಲದು ಒಂದೆಡೆಯೂರಿ
ಹರಿದಿದೆ ಎಲ್ಲೆಡೆ ನಗರದಿ ತೂರಿ
ತೇಲಿಹ ತನುಗಳು ಅರಚಿಹ ಮನಗಳು
ಅಲೆಗಳ ನಡುವಲಿ ಅಲೆದಿಹ ಜನಗಳು
ಮನೆಮಠವೆಲ್ಲವು ಮಸಣದ ತೆರದಿ
ಮಂಗಳವಾಡಲು ಮರಣದ ಸರದಿ
ಸದ್ದಿಲ್ಲದೆ ಸವೆದಿದೆ ಜೀವದ ಹಿಂಡು
ಗದ್ದಲ ಮರೆಸಿದೆ ಉಸಿರಿನ ಗುಂಡು
ಕೆಲವೇ ಕೆಲವೆಡೆ ಮನುಜನ ಬಳಗ
ಸೃಷ್ಟಿಯು ಚೆಲ್ಲಿತು ವೇದನೆ ಕೊರಗ
ಮೌನದಿ ಮಲಗಿಹ ಮಂದಣ ಲೋಕ
ಹೊಗೆಯಾಡುತಿರೆ ಎಲ್ಲೆಡೆ ಶೋಕ
ದೂರದಿ ನಿಂದು ಕಾಲನು ನಗುತಿರೆ
ಬಿಡಿಬಿಡಿ ಬಿಡಿಸಿದೆ ಸಿಟ್ಟಿನ ಹೊರಪೊರೆ
ತೆಪ್ಪಗೆ ತೆವಳಿದೆ ಶಾಂತದಿ ಧರೆಯು
ಸಪ್ಪಗೆ ಮಲಗಿದೆ ಗರ್ವದ ಧಗೆಯು
ಮೂಡಣದಲಿ ಹೊಸ ಸೂರ್ಯನ ಉದಯ
ಫಳ್ಳನೆ ಅರಳಿತು ಮಾನವ ಹೃದಯ
ಭಾನುವಾರ, ಜುಲೈ 24, 2011
ಕೊಚ್ಚೆ ನೀರ ಮೀನು
ಸಣ್ಣ ಬೀಜದಲಿ
ಅಡಗಿ ಕುಳಿತ ಮರ
ಕಣ್ಣು ಬಿಡದ ಬುದ್ಧ.
ದಟ್ಟ ಮೋಡದಲಿ
ಗುರುತೆ ಸಿಗದ ಹನಿ
ಚಿಪ್ಪಿನೊಡಲ ಬೆಳಕು.
ತತ್ತಿ ಗರ್ಭದಲಿ
ಬೆಚ್ಚಗಿರುವ ದ್ರವ
ಹಾರುವೆದೆಯ ತವಕ.
ಜಾವದಿಬ್ಬನಿಯ
ತೇವದಧರದಲಿ
ಉದಯದುಷೆಯ ಮೋಕ್ಷ.
ಸತತ ಕಾಲ್ತುಳಿತ
ಸಹಿಸಿ ನಗುವ ಪೊದೆ
ಕಡೆಗೆ ದಿವ್ಯ ದಾರಿ.
ತೊಗಲ ಜಾಲದಲಿ
ಸಿಲುಕಿದೀ ಆತ್ಮ
ಕೊಚ್ಚೆ ನೀರ ಮೀನು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)